ಅರೆಭಾಷೆ ದಿನಾಚರಣೆ - ನೆಹರು ಮೆಮೋರಿಯಲ್ ಕಾಲೇಜು ಸುಳ್ಯ
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘ - ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇದರ ಕೂಡ್ಕಟ್ಟ್ಲಿ ಅರೆಭಾಷೆ ದಿನಾಚರಣೆ (ಡಿಸೆಂಬರ್ 15) ನ ಕಾರ್ಯಕ್ರಮ ಕಾಲೇಜ್ನ ದೃಶ್ಯ-ಶ್ರಾವ್ಯ ಕೊಠಡಿಲಿ ನಡ್ತ್. ಕಾಲೇಜಿನ ಪ್ರಾಂಶುಪಾಲರ್ನೂ ಅರೆಭಾಷೆ ಸಂ. ಮ. ಸಾ. ಸಂಘದ ಗೌರವ ಪೋಷಕರೂ ಆದ ಶ್ರೀ ರುದ್ರಕುಮಾರ್ ಎಂ.ಎಂ ಅವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದೊ. ಅರೆಭಾಷೆ ಸಂಘದ ಸಂಚಾಲಕರಾದ ಶ್ರೀ ಸಂಜೀವ ಕುದ್ಪಾಜೆ ಅವು ಜಂಬರಕ್ಕೆ ಪ್ರಾಸ್ತಾವಿಕ ಮಾತನಾಡ್ದೊ. ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಪ್ರೊ. ಬಾಲಚಂದ್ರ ಗೌಡ ಎಂ ಅವು ನೊಙ ಏರ್ಸಿ ಕಾರ್ಯಕ್ರಮಕ್ಕೆ ಸಾಂಕೇತಿಕ ಉದ್ಘಾಟನೆ ಮಾಡಿ ಮಾತನಾಡ್ದೊ. ಅರೆಭಾಷೆ ಸಂಸ್ಕೃತಿನ ಉಳ್ಸಿ ಬೆಳ್ಸುವ ಜವಾಬ್ದಾರಿ ಯುವ ಜನತೆನ ಮೇಲೆ ಉಟ್ಟು ಅಂತ ಅವು ಹೇಳ್ದೊ. ಕಾಲೇಜಿನ ನಿವೃತ್ತ ಪ್ರಾಂಶುಪಾಲರ್ ಹಂಗೆನೇ ಅರೆಭಾಷೆ ಅಕಾಡೆಮಿನ ಮಾಜಿ ಸದಸ್ಯರಾದ ಡಾ. ಪೂವಪ್ಪ ಕಣಿಯೂರು ಅವು ಜಂಬರದ ನೆಂಟ್ರ್ಗ ಆಗಿ ಆಗಮಿಸಿ ಅರೆಭಾಷೆನ ಕುರಿತ್ ವೈಚಾರಿಕ ನೆಲೆಕಟ್ಟ್ಲಿ ಮಾತನಾಡ್ದೊ. ಮೋಹನ್ ಸೋನಾರ ಸಾಕ್ಷ್ಯಚಿತ್ರಕ್ಕೆ ಪ್ರದರ್ಶನ ಕೊಡ್ತಾ ಅವರ ಕೊಡುಗೆಗ ಅರೆಭಾಷೆ ಅಕಾಡಮಿಗೆ ದೊಡ್ಡ ಪ್ರಮಾಣಲಿ ಉಟ್ಟು, ಕಲೆನ ಉಸಿರ್ನ ಹಾಂಗೆ ಇಸಿಕಂಡ ಸೋನಾರ ಬೊದ್ಕ್ ಎಲ್ಲವುಕೂ ಮಾದರಿ ಅಂತ ಹೇಳ್ದೊ. ಜಂಬರದ ಇನ್ನೊಬ್ಬ ನೆಂಟ್ರ್ಗ ಆದ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಮಾಜ